ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್ : ಬೇಳೆಕಾಳುಗಳ ಬೆಲೆಯಲ್ಲಿ ದಿಢೀರ್ ಏರಿಕೆ



ಬೆಂಗಳೂರು :

ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್, ಶೀಘ್ರವೇ ಬೇಳೆಕಾಳುಗಳ ಬೆಲೆಯಲ್ಲಿಯೂ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ.


ಗುಜರಾತ್ ನಿಂದ ಬೇಡಿಕೆಗೆ ತಕ್ಕಷ್ಟು ಬೇಳೆಕಾಳುಗಳ ಪೂರೈಕೆ ಆಗದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬೇಳೆಕಾಳುಗಳ ಬೆಲೆಯಲ್ಲಿ ದಿಢೀರ್ ಏರಿಕೆಯಾಗುವ ಸಾಧ್ಯತೆ ಇದೆ.


ರೈತರು ದ್ವಿದಳ ಧಾನ್ಯಗಳ ಕೃಷಿಯಿಂದ ಕ್ರಮೇಣವಾಗಿ ಹೆಚ್ಚಿನ ಮೌಲ್ಯದ ನಗದು ಬೆಳೆಗಳಿಗೆ ಬದಲಾಗುತ್ತಿದ್ದಾರೆ, ಇದು ಉತ್ಪಾದನೆಯಲ್ಲಿ ಇಳಿಕೆಗೆ ಕಾರಣವಾಗುತ್ತದೆ. ಹೆಚ್ಚುವರಿಯಾಗಿ, ಅಕಾಲಿಕ ಮಳೆಯು ಬೆಳೆಗಳ ಮೇಲೆ ಪರಿಣಾಮ ಬೀರಿತು. ಕೇಂದ್ರ ಕೃಷಿ ಸಚಿವಾಲಯದ ಆರಂಭಿಕ ಪ್ರಕ್ಷೇಪಗಳ ಪ್ರಕಾರ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ಮಧ್ಯಪ್ರದೇಶದಲ್ಲಿ ಬೆಳೆಹಾನಿಯಾಗಿದೆ ಎಂದು ವರದಿಯಾಗಿದೆ.


ಉದ್ದಿನ ಬೇಳೆ 160 ರೂ, ಕಡ್ಲೇಬೇಳೆ 90-110 ರೂ.ಹೆಸರುಬೇಳೆ 110 ರೂ, ತೊಗರಿಬೇಳೆ 180 ರೂ. ಹೆಸರುಬೇಳೆ 110 ರೂ. ಕಾಬೂಲ್ ದರ 170 ರೂ.ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Post a Comment (0)
Previous Post Next Post

Responsive Ads

Responsive Ads